Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80042

ಸರಸ್ವತಿ ಎಲ್ಲರಿಗೂ ಒಲಿದು ಬರಲ್ಲ, ಸುಹಾನ ಅಂದ್ರೆ ಹೆಮ್ಮೆ: ಸುದೀಪ್

$
0
0

ಮಂಡ್ಯ; ಸುಹಾನ ಅಂದ್ರೆ ನಮ್ಮ ಹೆಮ್ಮೆ. ಸರಸ್ವತಿ ಎಲ್ಲರಿಗೂ ಒಲಿದು ಬರಲ್ಲ. ಸುಹಾನ ಅವರು ಜೀವನದಲ್ಲಿ ಚೆನ್ನಾಗಿ ಇರುತ್ತಾರೆ. ಸಂಗೀತ ಕಾರ್ಯಕ್ರಮದಲ್ಲಿ ಅವರು ಮುಂದುವರೆಯುತ್ತಾರೆ ಸುದೀಪ್ ಹೇಳಿದ್ದಾರೆ.

ಹೆಬ್ಬುಲಿ ಚಿತ್ರದ ಯಶಸ್ಸನ್ನ ಆಚರಿಸಲು ಮಂಡ್ಯದ ಮಹಾವೀರ ಚಿತ್ರಮಂದಿರಕ್ಕೆ ಸುದೀಪ್ ಆಗಮಿಸಿದ್ದರು. ಚಿತ್ರದ ಯಶಸ್ಸಿನ ಬಗ್ಗೆ ಹೆಮ್ಮೆ ಇದೆ. ಕರ್ನಾಟಕದಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಹಾಗಾಗಿ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಂದಿದ್ದೇನೆ ಎಂದು ತಿಳಿಸಿದರು.

ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಡಬ್ಬಿಂಗ್ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್, ನಮಗೆ ತಂದೆ-ತಾಯಿ ಅಂದ್ರೆ ತುಂಬಾ ಪ್ರೀತಿ. ಪ್ರಪಂಚದ ಯಾವುದೇ ಭಾಗದಲ್ಲಿ ಇದ್ರು ಅವರಿಗೆ ಕರೆ ಮಾಡಿ ಮಾತನಾಡುತ್ತೇವೆ. ದಿಢೀರ್ ಅಂತಾ ಹೋರಾಟ ಹಮ್ಮಿಕೊಂಡಿದ್ರಿಂದ ಭಾಗಿಯಾಗಲು ಆಗಲಿಲ್ಲ. ಆದರೆ ನಾವು ಚಿತ್ರರಂಗ ಬಿಟ್ಟುಕೊಡ್ತೀವಾ? ನಾವು ಎಲ್ಲೆ ಇದ್ರು ಹೋರಾಟ ಮಾಡ್ತಿವಿ ಎಂದು ಹೇಳಿದರು.

ಇನ್ನು ದರ್ಶನ್ ಅವರ ಬಗ್ಗೆ ಮಾತನಾಡಲು ನಿರಾಕರಿಸಿದ ಸುದೀಪ್ ಕೈ ಮುಗಿದು ಮುಂದೆ ಸಾಗಿದರು. ತಮ್ಮ ನೆಚ್ಚಿನ ನಾಯಕ ನಟ ಸುದೀಪ್ ಅವರನ್ನು ನೋಡಲು ಚಿತ್ರಮಂದಿರದ ಮುಂಭಾಗದಲ್ಲಿ ಅಭಿಮಾನಿಗಳು ಮುಗಿಬಿದ್ದ ಪರಿಣಾಮ ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದರು.

 


Viewing all articles
Browse latest Browse all 80042


<script src="https://jsc.adskeeper.com/r/s/rssing.com.1596347.js" async> </script>