Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80012

ಸಿಎಂ ಆಪ್ತ ಪಿ. ರಮೇಶ್‍ರಿಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ?

$
0
0

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಆಪ್ತ ಪಿ. ರಮೇಶ್ ವಿರುದ್ಧ ಈಗ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ಕೇಳಿ ಬಂದಿದೆ.

ಟೀಚರ್ ಕೆಲಸದ ವರ್ಗಾವಣೆ ವಿಚಾರದ ಸಂಬಂಧ ನಾನು ರಮೇಶ್ ಬಳಿ ತೆರಳಿದಾಗ ನಗರದ ಪ್ರತಿಷ್ಟಿತ ಹೋಟೆಲ್ ಗೆ ಕರೆದೊಯ್ದು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಭಾನುವಾರ ಸಂಜೆ 4 ಗಂಟೆಗೆ ದೂರು ನೀಡಲು ಹೋದಾಗ ದೂರನ್ನು ಸ್ವೀಕರಿಸಿಲ್ಲ. ಪೊಲೀಸರು ಕೇಸನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ಪೊಲೀಸರಿಗೆ ದೂರು ನೀಡಿದರೆ ಜೀವ ತೆಗೆಯುವುದಾಗಿ ರಮೇಶ್ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಯಾರೂ ಬಂದಿಲ್ಲ: ಮಹಿಳೆಯ ಆರೋಪಕ್ಕೆ ಸಂಬಂಧಿಸಿದಂತೆ ಡಿಸಿಪಿ ಅಜಯ್ ಹಿಲೋರಿ ಪ್ರತಿಕ್ರಿಯಿಸಿದ್ದು, ರಮೇಶ್ ವಿರುದ್ಧ ಯಾರೂ ದೂರನ್ನು ನೀಡಲು ಬಂದಿಲ್ಲ.ಇದೂವರೆಗೂ ಮಹಿಳೆ ಪೊಲೀಸ್ ಠಾಣೆಗೆ ಬಂದೇ ಇಲ್ಲ. ಮಾಧ್ಯಮ ಪ್ರತಿನಿಧಿಗಳಿಂದ ನನಗೆ ವಿಚಾರ ತಿಳಿಯಿತು. ನಮಗೆ ದೂರು ತೆಗೆದುಕೊಳ್ಳಬೇಡಿ ಎಂದು ಒತ್ತಡ ಹೇರಿಲ್ಲ. ಠಾಣೆಗೆ ಬಂದರೆ ದೂರನ್ನು ಸ್ವೀಕರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಲೈಂಗಿಕ ದೌರ್ಜನ್ಯ ನಡೆಸಿಲ್ಲ: ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ, ಆ ಯುವತಿ ಐಎಎಸ್ ಮಾಡಲು ಸಹಾಯ ಬೇಡಿಕೊಂಡು ನನ್ನ ಬಳಿ ಬಂದಿದ್ದಳು. ನಮ್ಮ ಟ್ರಸ್ಟ್ ವತಿಯಿಂದ ಆಕೆಗೆ ಸಹಾಯ ಮಾಡಿದ್ದು ನಿಜ, ಆದ್ರೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿಲ್ಲ. ಇದೆಲ್ಲ ಕಟ್ಟುಕತೆಯಾಗಿದ್ದು ಆಮೇಲೆ ಮಾತನಾಡುತ್ತೇನೆ ಎಂದು ಹೇಳಿ ಪಿ. ರಮೇಶ್ ಫೋನ್ ಕರೆಯನ್ನು ಕಡಿತಗೊಳಿಸಿದ್ದಾರೆ.

ರಮೇಶ್ ಯಾರು?
ಕಾಂಗ್ರೆಸ್ ನಾಯಕರಾಗಿರುವ ಪಿ. ರಮೇಶ್ ಸಿಎಂ ಆಪ್ತರಾಗಿದ್ದು, ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ. 2018ರ ವಿಧಾನಸಭಾ ಚುನಾವಣೆಗೆ ಸಿವಿ ರಾಮನ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಪಿ. ರಮೇಶ್ ಡಿಸಿಪಿ ಅಜಯ್ ಹಿಲೋರಿಗೆ ತುಂಬಾ ಆಪ್ತರಾದ ಹಿನ್ನೆಲೆಯಲ್ಲಿ ಕೇಸನ್ನು ಮುಚ್ಚಿ ಹಾಕಲು ಅಧಿಕಾರಿಗಳು ಪ್ರುಯತ್ನಿಸುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

 


Viewing all articles
Browse latest Browse all 80012


<script src="https://jsc.adskeeper.com/r/s/rssing.com.1596347.js" async> </script>