Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80310

ಕಾಫಿನಾಡಲ್ಲಿ ಕಣ್ಮನ ತಣಿಸಿದ ಬೈಕ್ ರೇಸ್

$
0
0

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಮುಗುಳುವಳ್ಳಿಯಲ್ಲಿ ನಡೆದ ಮನಮೋಹಕ ಬೈಕ್ ರೇಸ್ ನೋಡುಗರ ಮನ ತಣಿಸ್ತು. ಕಳೆದ 10 ವರ್ಷಗಳಿಂದ ನಿಂತಿದ್ದ ಬೈಕ್ ರೇಸ್‍ಗೆ ಇಂದು ಚಾಲನೆ ಸಿಕ್ಕಂತಾಗಿದ್ದು ಮುಂದಿನ ದಿನಗಳಲ್ಲಿ ಕಾರ್ ರೇಸ್‍ನಂತೆ ಬೈಕ್ ರೇಸನ್ನೂ ಪ್ರತಿವರ್ಷ ನಡೆಸೋದಾಗಿ ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದ್ರು. ಇಷ್ಟು ದಿನಗಳ ಕಾಲ ಕಾಫಿನಾಡಿನ ಕಾರ್ ರೇಸನ್ನೇ ನೋಡಿ ಎಂಜಾಯ್ ಮಾಡ್ತಿದ್ದ ಕಾಫಿನಾಡಿಗರು ಇಂದು ಬೈಕ್ ರೇಸ್ ನೋಡಿ ಪುಳಕಗೊಂಡ್ರು.

ಚಿಕ್ಕಮಗಳೂರು 13 ತಂಡದ ನೇತೃತ್ವದಲ್ಲಿ ನಡೆದ ಬೈಕ್ ರೇಸ್‍ಗೆ ಚಿಕ್ಕಮಗಳೂರು, ಮಂಡ್ಯ, ಮೈಸೂರು, ಶಿವಮೊಗ್ಗ, ಬೆಂಗಳೂರು, ತುಮಕೂರು, ಉಡುಪಿ ಸೇರಿದಂತೆ ಕೇರಳ, ಕೊಚ್ಚಿ, ತಿರುವನಂತಪುರ, ಮುಂಬೈ ಸೇರಿದಂತೆ ಅಂತಾರಾಷ್ಟ್ರೀಯ ರೈಡರ್‍ಗಳು ಭಾಗವಹಿಸಿ ನೋಡುಗರನ್ನು ರಂಜಿಸಿದ್ರು. ರೇಸ್‍ನಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಈ ರೇಸ್‍ಗೆ ಕಾರ್ ರೇಸ್ ನಡೆಸಿ ಅನುಭವವಿರೋ ಚಿಕ್ಕಮಗಳೂರು ಮೋಟರ್ ಸ್ಪೋರ್ಟ್ಸ್  ಕ್ಲಬ್ ಕೂಡ ಸಾಥ್ ನೀಡಿತ್ತು.

ಒಟ್ಟು 150ಕ್ಕೂ ಹೆಚ್ಚು ಬೈಕ್‍ಗಳು ಭಾಗವಹಿಸಿದ್ವು. ಓರ್ವ ರೈಡರ್‍ಗಿಂತ ಮತ್ತೊಬ್ಬ ಚಾಣಾಕ್ಷನಂತೆ ಡ್ರೈವ್ ಮಾಡ್ತಿದ್ದಿದ್ದನ್ನ ಕಂಡ ನೋಡುಗರಿಗೆ ಮಿಂಚಿನ ವೇಗದಲ್ಲಿ ಓಡ್ತಿರೋ ಬೈಕಿನ ರೈಡ್‍ಗಳು ತಮ್ಮ ಎದೆಮೇಲೆ ಓಡಿದಂತಹ ಅನುಭವವಾಗ್ತಿತ್ತು. ಒಂದೇ ಬಾರಿಗೆ 10ಕ್ಕೂ ಹೆಚ್ಚು ಬೈಕ್‍ಗಳು ಟ್ರ್ಯಾಕ್ ಇಳಿದಾಗ ಗೆಲುವಿನ ಜಿದ್ದಾಜಿದ್ದಿಗೋಸ್ಕರ ನಾಮುಂದು-ತಾಮುಂದು ಅಂತಾ ರೈಡರ್‍ಗಳು ರೈಡ್ ಮಾಡುವಾಗ ನೋಡುಗರು ಕೂಡ ಈ ಟ್ರ್ಯಾಕ್‍ನಿಂದ ಆ ಟ್ರ್ಯಾಕ್‍ಗೆ ಓಡಿ ಚಪ್ಪಾಳೆ, ಶಿಳ್ಳೆ ಹೊಡೆದು ರೈಡರ್‍ಗಳಿಗೆ ಸಾಥ್ ನೀಡಿದ್ರು. ರೈಡರ್‍ಗಳು ಕೂಡ ನೋಡುಗರಿಗೆ ರಂಜಿಸೋಕೆ ಕೆಲಸ ಸಾಹಸದ ಸ್ಟಂಟ್‍ಗಳನ್ನ ಮಾಡಿದ್ರು.

ಸದಾ ತಂಪೆರೆಯೋ ಕಾಫಿನಾಡಿನ ವಾತಾವರಣ ಬೈಕ್ ರೇಸ್‍ಗೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಈ ಬಾರಿಯ ಭೀಕರ ಬರಗಾಲದಿಂದ ಬೈಕ್ ರೇಸ್‍ಯ ಟ್ರ್ಯಾಕ್ ನೋಡಿದ್ರೆ ಇದು ಚಿಕ್ಕಮಗಳೂರೋ ಇಲ್ಲ ಉತ್ತರಕರ್ನಾಟಕವೋ ಎಂದು ನೋಡುಗರಿಗೆ ಭಾಸವಾಗ್ತಿತ್ತು. ಆದ್ರೆ, ಈ ಟ್ರ್ಯಾಕ್ ಬೈಕ್ ರೇಸ್‍ಗೆ ಹೇಳಿ ಮಾಡಿಸಿದಂತಿತ್ತು. 10ಕ್ಕೂ ಹೆಚ್ಚು ಬೈಕ್‍ಗಳು ಗೆಲುವಿಗಾಗಿ ಟ್ರ್ಯಾಕ್‍ಗೆ ಇಳಿದಾಗ ಮುನ್ನುಗ್ಗೋ ವೇಗದಲ್ಲಿ ರೈಡರ್‍ಗಳು ಎಕ್ಸಲೇಟರ್ ರೈಸ್ ಮಾಡಿದಂತೆ ಕ್ರೀಡಾಂಗಣವೆಲ್ಲಾ ಧೂಳುಮಯವಾಗ್ತಿತ್ತು. ನೋಡುಗರಿಗೆ ಯಾವ ಬೈಕ್ ಎಲ್ಲಿದೆ ಎಂಬುದೇ ಅರ್ಥವಾಗದಂತ ಪರಿಸ್ಥಿತಿ ನಿರ್ಮಾಣವಾಗ್ತಿತ್ತು. ಆದ್ರೂ, ಉರಿಯೋ ಬಿಸಿಲಲ್ಲೂ ಜನ ಬೈಕ್ ರೇಸ್ ಕಂಡು ಖುಷಿ ಪಟ್ರು.

ಮೂರು ವಿಭಾಗದಲ್ಲಿ ನಡೆಯುತ್ತಿರೋ ರೇಸ್‍ಯಲ್ಲಿ ಒಂದೊಂದು ವಿಭಾಗಕ್ಕೂ ಪ್ರತ್ಯೇಕ ಬಹುಮಾನವಿದ್ದು, ಇಲ್ಲಿ ಗೆದ್ದೋರು ರಾಷ್ಟ್ರ ಮಟ್ಟದಲ್ಲೂ ಭಾಗವಹಿಸೋ ಅವಕಾಶ ಸಿಗಬಹುದು ಅನ್ನೋದು ಆಯೋಜಕರ ಅಭಿಲಾಷೆ. ರೇಸ್‍ಯಲ್ಲಿ ಲೋಕಲ್ ರೈಡರ್‍ಗಳಿಗೂ ಉತ್ತೇಜಿಸೋ ದೃಷ್ಟಿಯಿಂದ ಅವರಿಗೂ ಒಂದು ಹಂತದಲ್ಲಿ ಭಾಗವಹಿಸೋ ಅವಕಾಶ ಕಲ್ಪಿಸಿದ್ರು ಆಯೋಜಕರು. ಯಾಕಂದ್ರೆ, ದಾರಿ, ಜನವಸತಿ ಪ್ರದೇಶದಲ್ಲಿ ವೇಗವಾಗಿ ಅಥವಾ ವಿಭಿನ್ನವಾಗಿ ಬೈಕ್ ಓಡಿಸಿ ಅನಾಹುತ ಮಾಡೋದಕ್ಕಿಂತ ಇಂತಹಾ ರೇಸ್‍ಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನ ಇಲ್ಲಿ ತೋರಿಸಲಿ ಎಂಬ ಕಾರಣಕ್ಕೆ ಅವಕಾಶ ನೀಡಿದ್ವಿ, ಇಂತಹಾ ರೇಸ್‍ಗಳು ಪ್ರತಿವರ್ಷ ನಡೆದ್ರೆ ರಸ್ತೆಯಲ್ಲಿ ಬೈಕ್ ರೇಸ್ ನಡೆಸೋರ ಸಂಖ್ಯೆ ಕಡಿಮೆಯಾಗಲಿದೆ ಅನ್ನೋ ನಂಬಿಕೆ ಇದೆ, ನಮ್ಮ ಈ ಉದ್ದೇಶ ಶೇ.50 ರಷ್ಟು ಈಡೇರುತ್ತೆ ಅಂತಾರೆ ಆಯೋಜಕರು. ರೇಸ್‍ನಲ್ಲಿ ರಾಷ್ಟ್ರಮಟ್ಟದ ರೈಡರ್‍ಗಳಿಗೂ ಸ್ಥಳಿಯ ರೈಡರ್‍ಗಳು ಸೆಡ್ಡು ಹೊಡೆಯೋ ರೀತಿಯಲ್ಲಿ ರೈಡ್ ಮಾಡಿ ನೋಡುಗರ ಮನಸೂರೆಗೊಳಿಸಿದ್ರು.

ಇನ್ನು ಬೈಕ್ ರೇಸ್‍ಗೆ ತಕ್ಕಂತೆ ಟ್ರ್ಯಾಕ್ ಕೂಡ ನಿರ್ಮಾಣವಾಗಿತ್ತು. ಹಾವು ಬಳುಕಿನ ಮೈಕಟ್ಟಿನ ಟ್ರ್ಯಾಕ್‍ನಲ್ಲಿ ಅದೇ ಆಕಾರದಲ್ಲಿ ವೇಗವಾಗಿ ಬೈಕ್‍ಗಳು ಓಡ್ತಿದ್ರೆ ನೋಡುಗರ ದೃಷ್ಟಿ ಕೂಡಾ ಅಷ್ಟೇ ವೇಗವಾಗಿರ್ತಿತ್ತು. ಟ್ರ್ಯಾಕ್‍ನ ಒಂದು ಸುತ್ತು ಬರುವಷ್ಟರಲ್ಲಿ ಅಂದಾಜು ಒಂದರಿಂದ ಒಂದೂವರೆ ಕಿ.ಮೀ. ಸಾಗಿದಂತಾಗ್ತಿತ್ತು. ಒಂದು ಸುತ್ತನ್ನ ಮುಗಿಸಲು ಈ ಟ್ರ್ಯಾಕ್‍ನಲ್ಲಿ ಐದು ಬಾರಿ ರೌಂಡ್ ಹೊಡೆಯಬೇಕಿತ್ತು. ಟ್ರ್ಯಾಕ್‍ನಲ್ಲಿ ಅಲ್ಲಲ್ಲೇ ಹಾಕಿದ್ದ ಸಣ್ಣ-ಸಣ್ಣ ಹಂಪ್‍ಗಳು, ಚಿಕ್ಕ-ಚಿಕ್ಕ ಗುಂಡಿಗಳಲ್ಲಿ ಬೈಕ್ ಹಾರುವಾಗ ನೋಡುಗರು ಕುಣಿದು ಕುಪ್ಪಳಿಸಿ ಕೇಕೆ ಹಾಕಿ ಸಂಭ್ರಮಿಸಿದ್ರು.

ರಾಜ್ಯದೆದುರು ಕಾಫಿನಾಡು ಹಲವು ವಿಚಾರಗಳಲ್ಲಿ ಉಳಿದೆಲ್ಲಾ ಜಿಲ್ಲೆಗಳಿಗಿಂತ ತುಸು ಭಿನ್ನ ಎಂದೇ ಹೇಳಬಹುದು. ಯಾಕಂದ್ರೆ, ಕ್ರೀಡೆಯನ್ನೇ ಕೇಂದ್ರೀಕೃತವಾಗಿ ಹೇಳೋದಾದ್ರೆ ಕಾಫಿನಾಡಲ್ಲಿ ಆಗಾಗ ಕೆಸರುಗದ್ದೆ ಓಟ, ಕೆಸರುಗದ್ದೆ ವಾಲಿಬಾಲ್, ಎತ್ತಿನಗಾಡಿ ಸ್ಫರ್ದೆ, ಕಬ್ಬಡ್ಡಿ, ಕುಸ್ತಿ ಸೇರಿದಂತೆ ಪುರಾತನವಾದ ಸಾಂಪ್ರದಾಯಿಕ ಕ್ರೀಡೆಗಳು ಕಾಫಿನಾಡಲ್ಲಿ ಇಂದಿಗೂ ಜೀವಂತ. ಇದ್ರ ಜೊತೆ ಆಗಾಗ್ಗೆ ಕ್ರಿಕೆಟ್, ವಾಲಿಬಾಲ್‍ನಂತಹಾ ಆಧುನಿಕ ಕ್ರೀಡೆಗಳು ನಡೆಯುತ್ತಿರುತ್ವೆ. ಕಾಫಿನಾಡು ಚಿಕ್ಕಮಗಳೂರು ಆಧುನಿಕ ಜಗತ್ತಿಗೂ ಒಗ್ಗಿಕೊಂಡು ಬದುಕ್ತಾ, ಪುರಾತನ ಕ್ರೀಡೆಯನ್ನೂ ಉಳಿಸಿ-ಬೆಳೆಸಿ ಪೋಷಿಸ್ತಿದೆ ಅಂದ್ರೆ ತಪ್ಪಿಲ್ಲ.


Viewing all articles
Browse latest Browse all 80310

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>