Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80485

ಕೀಟ್ಲೆ ಮಾಡಿದರೆಂದು ಮಕ್ಕಳಿಗೇ ಬರೆ ಹಾಕಿದ ಪಾಪಿ ತಂದೆ

$
0
0

ಚಿಕ್ಕಮಗಳೂರು: ಮಕ್ಕಳು ಕೀಟಲೆ ಮಾಡಿದರು ಎಂದು ತಂದೆಯೊಬ್ಬ ದೋಸೆ ಕಡ್ಡಿ ಬಿಸಿ ಮಾಡಿ ಬರೆ ಹಾಕಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೆಸ್ಗಲ್‍ನಲ್ಲಿ ನಡೆದಿದೆ.

ಹರೀಶ್ ಬರೆ ಹಾಕಿದ ಕ್ರೂರ ತಂದೆ. 10 ವರ್ಷದ ಹಿಂದೆ ಮದುವೆಯಾದ ಹರೀಶ್ ಹಾಗೂ ಪುಷ್ಪ ದಂಪತಿಗೆ 2 ಹೆಣ್ಣು, 2 ಗಂಡು ಮಕ್ಕಳಿವೆ. ಪಾಪಿ ತಂದೆಯ ಕೃತ್ಯದಿಂದ ಇದೀಗ ಎರಡು ಮಕ್ಕಳು ಓಡಾಡುವುದಕ್ಕೂ ಆಗದೇ ನರಕ ಅನುಭವಿಸುತ್ತಿದ್ದಾರೆ. ಮಕ್ಕಳ ದಯನೀಯ ಸ್ಥಿತಿ ಕಂಡು ಹೆತ್ತೊಡಲು ಕಣ್ಣೀರಲ್ಲಿ ಮುಳುಗಿದೆ.

ಸೈಕೋ ಹರೀಶ್ ವರ್ಷದ ಹಿಂದೆಯೂ ಪತ್ನಿ, ಮಕ್ಕಳಿಗೆ ವೈರ್‍ನಿಂದ ಹೊಡೆದು, ಮನೆಗೆ ಬೆಂಕಿ ಇಟ್ಟಿದ್ದನು. ಆಗ ಪತ್ನಿಯೇ ದೂರು ನೀಡಿ ಜೈಲಿಗೆ ಹಾಕಿಸಿದ್ದರು. ಮತ್ತೆ ಅವರೇ ಪತಿ ಸರಿ ಹೋಗಬಹುದು ಎಂದು ತಾನೇ ಹೋಗಿ ಜಾಮೀನು ನೀಡಿ ಮನೆಗೆ ಕರೆ ತಂದಿದ್ದರು. ಜೈಲಿನಿಂದ ಬಂದ ನಂತರ ಹರೀಶ್ ಮತ್ತೆ ತನ್ನ ವರಸೆ ಮುಂದುವರಿಸಿದ್ದಾನೆ.

ಮಕ್ಕಳ ಮುಗ್ಧತೆ ಕಂಡರೆ ಎಂಥವರು ಕೂಡ ಕರಗುತ್ತಾರೆ. ಇಲ್ಲಿ ಐ ಲವ್ ಯೂ ಅಪ್ಪ ಎಂದು ಎನಿಸಿಕೊಳ್ಳಬೇಕಿದ್ದ ಕುಡುಕ ಹರೀಶ್, ಮಕ್ಕಳ ಪಾಲಿಗೆ ವಿಲನ್ ಆಗಿದ್ದಾನೆ. ಸೈಕೋ ಪತಿಯ ಕಾಟ ತಡೆಯಲಾಗದೆ ಪುಷ್ಪ ತನ್ನ ನಾಲ್ಕು ಮಕ್ಕಳ ಸಮೇತ ತವರು ಸೇರಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟವರು ಕೂಡಲೇ ಹರೀಶ್ ವಿರುದ್ಧ ಕ್ರಮ ಕೈಗೊಂಡು, ಸುಟ್ಟ ಗಾಯಗಳಿಂದ ಬಳಲುತ್ತಿರುವ ಮಕ್ಕಳಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕಿದೆ.

The post ಕೀಟ್ಲೆ ಮಾಡಿದರೆಂದು ಮಕ್ಕಳಿಗೇ ಬರೆ ಹಾಕಿದ ಪಾಪಿ ತಂದೆ appeared first on Public TV News.


Viewing all articles
Browse latest Browse all 80485

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>